-->
Bookmark

Gajendragad : ವಾಣಿಜ್ಯ ವಿಭಾಗದಲ್ಲಿ ತಾಲೂಕಿಗೆ ಪ್ರಥಮ, ಜಿಲ್ಲೆಗೆ ತೃತೀಯ ರಾಜ್ಯಕ್ಕೆ 11ನೇ ಸ್ಥಾನ

Gajendragad : ವಾಣಿಜ್ಯ ವಿಭಾಗದಲ್ಲಿ ತಾಲೂಕಿಗೆ ಪ್ರಥಮ, ಜಿಲ್ಲೆಗೆ ತೃತೀಯ ರಾಜ್ಯಕ್ಕೆ 11ನೇ ಸ್ಥಾನ 

ಗಜೇಂದ್ರಗಡ : (Apr_08_2025)
ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ ಪುರ್ತಗೇರಿ ಕ್ರಾಸಿನಲ್ಲಿರುವ ಶ್ರೀ ಅನ್ನದಾನೇಶ್ವರ ಪದವಿ ಪೂರ್ವ ಕಾಲೇಜಿನ 2024-2025ನೇ ಸಾಲಿನ 
ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ  ವಾಣಿಜ್ಯ ವಿಭಾಗದ
 ನಮ್ರತಾ ಪಾಟೀಲ್  ವಿದ್ಯಾರ್ಥಿನಿ 98 % (588)  ಅಂಕಗಳನ್ನು ಪಡೆದು ತಾಲೂಕಿಗೆ ಪ್ರಥಮ, ಜಿಲ್ಲೆಗೆ ತೃತೀಯ, ಹಾಗೂ  ರಾಜ್ಯಕ್ಕೆ 11ನೇ ಸ್ಥಾನ
ಪಡೆದು ಕಾಲೇಜಿನ ಕೀರ್ತಿಯನ್ನು  ಹೆಚ್ಚಿಸಿದ್ದಾರೆ.

 ಉತ್ತಮ ಅಂಕ ಪಡೆದ ವಿದ್ಯಾರ್ಥಿನಿಗೆ ಕಾಲೇಜಿನ  ಪ್ರಾಚಾರ್ಯರಾದ ವಸಂತ್ ರಾವ್ ಗಾರಗಿ ಅಭಿನಂದಿಸಿದ್ದಾರೆ. ಕಿರಾ ನ್ಯೂಸ್ ಕನ್ನಡದೊಂದಿಗೆ ಮಾತನಾಡಿದ ಅವರು, ವಿದ್ಯಾರ್ಥಿನಿ ಸಾಧನೆ ಕಾಲೇಜಿಗೆ ಹೆಮ್ಮೆ ತರುವಂತದ್ದು, ನಮ್ಮಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತೇವೆ. ನುರಿತ ಲಕ್ಚರರ್ಸ್ ಅವರನ್ನು ಮರೆಯಬಾರದು‌. ವಿದ್ಯಾರ್ಥಿಗಳ ಶ್ರಮದೊಂದಿದೆ ಟಿಚಿಂಗ್ ಸ್ಟಾಫ್ ಹೆಚ್ಚಿನ ಮುತುವರ್ಜಿ ವಹಿಸುತ್ತಾರೆ ಎಂದು ಹೇಳಿದರು. 

ವಿದ್ಯಾರ್ಥಿನಿ ಈ ಹಿಂದೆ ಆಂಗ್ಲ ಮಾಧ್ಯಮದ ಚರ್ಚಾ ಸ್ಪರ್ಧೆಯಲ್ಲೂ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ರು. ಅಲ್ಲದೆ ಪ್ರಥಮ ಪಿಯುಸಿಯಲ್ಲೂ ಉತ್ತಮ ಅಂಕ ಪಡೆದಿದ್ರು. ಶೈಕ್ಷಣಿಕ ವರ್ಷದ ಪಿಯುಸಿಯಲ್ಲಿ ವಾಣಿಜ್ಯ ವಿಭಾಗದಲ್ಲಿ ತಾಲೂಕಿಗೆ ಪ್ರಥಮ ಸ್ಥಾನ,  ಜಿಲ್ಲೆಗೆ ತೃತೀಯ ಸ್ಥಾನ ಮತ್ತು ರಾಜ್ಯಕ್ಕೆ 11ನೇ ಸ್ಥಾನ ಪಡೆದು ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ ಎಂದು ತಿಳಿಸಿದರು‌.  

ಇನ್ನೂ, ದ್ವಿತೀಯ ಪಿಯುಸಿಯಲ್ಲಿ ಉತ್ತಮ ಅಂಕ ಪಡೆದು ಕಾಲೇಜಿಗೆ ಕೀರ್ತಿ ತಂದ ಎಲ್ಲಾ ವಿದ್ಯಾರ್ಥಿಗಳಿಗೆ ಕಾಲೇಜಿನ ಅಧ್ಯಕ್ಷರಾದ ಶ್ರೀ ಮ.ನಿ.ಪ್ರ  ಮುಪ್ಪಿನ ಬಸವಲಿಂಗ  ಮಹಾಸ್ವಾಮಿಗಳು ಕಾಲೇಜಿನ ಆಡಳಿತ ಅಧಿಕಾರಿಗಳಾದ  ಎನ್ ಆರ್ ಗೌಡರ್,  ಕಾರ್ಯದರ್ಶಿಗಳಾದ ಆರ್ ಜೆ ದೊಡ್ಡಮೇಟಿ, ಕಾಲೇಜಿನ  ಚೆರ್ಮನ್ನರು ವೀರಯ್ಯ ವ್ಹಿ ವಸ್ತ್ರದ್, ಸದಸ್ಯರಾದ ಡಾ ಬಿ ವ್ಹಿ ಕಂಬಳ್ಳಾಳ್, ಸದಾಶಿವ ಕರಡಿ, ಮುದಕಪ್ಪ ತೊಂಡಿಹಾಳ,ಪ್ರಾಚಾರ್ಯರಾದ ವಸಂತರಾವ್ ಗಾರಗಿ ಮತ್ತು ಕಾಲೇಜಿನ ಎಲ್ಲ ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗದವರು ಶುಭಾಶಯಗಳನ್ನು ತಿಳಿಸಿದ್ದಾರೆ.
Post a Comment

Post a Comment