-->
Bookmark

Dharwad : ವಿದ್ಯಾಕಾಶಿಯಲ್ಲಿ ಸಂತ ಸೇವಾಲಾಲ್ & ತಾಯಿ ಮರಿಯಮ್ಮ ದೇವಸ್ಥಾನ : ಪ್ರೊ. ಸೀತಾರಾಮ್ ಪವಾರ್

Dharwad : ವಿದ್ಯಾಕಾಶಿಯಲ್ಲಿ ಸಂತ ಸೇವಾಲಾಲ್ & ತಾಯಿ ಮರಿಯಮ್ಮ ದೇವಸ್ಥಾನ : ಪ್ರೊ. ಸೀತಾರಾಮ್ ಪವಾರ್ 
ಧಾರವಾಡ : (Feb_01_2025)
ಧಾರವಾಡದ ಹಳಿಯಾಳ ರಸ್ತೆಯ ಕೆ‌.ಐ.ಡಿ.ಬಿ ಕಾಲೊನಿ ಹತ್ತಿರ ಸದ್ಗುರು ನಗರದಲ್ಲಿ ನೂತನವಾಗಿ ಸಂತ ಸೇವಾಲಾಲ್ ಮತ್ತು ತಾಯಿ ಮರಿಯಮ್ಮ ದೇವಿ ದೇವಸ್ಥಾನ ನಿರ್ಮಾಣವಾಗಿದೆ. ಬಂಜಾರ ಸಮುದಾಯದ ಅಭಿವೃದ್ಧಿ ಕನಸು ಕಂಡ ನಾಯಕರಲ್ಲಿ ಸೀತಾರಾಮ್ ಪವಾರ್ ಅವರೂ ಕೂಡ ಒಬ್ಬರು. ಅವರ ಕನಸಿನ ಕೂಸಾದ ದೇವಸ್ಥಾನ ನಿರ್ಮಾಣವಾಗಿದೆ. ಈಗ ಮೂರ್ತಿ ಪ್ರತಿಷ್ಠಾಪನೆಗೆ ದಿನಗಣನೆ ಆರಂಭವಾಗಿದೆ.
ಈಗಾಗಲೇ ಎಲ್ಲ ಕೆಲಸ ಕಾರ್ಯಗಳು ಮುಗಿದಿದ್ದು, ಗದ್ದುಗೆ ಪೂಜೆಯನ್ನ ಜನವರಿ 31 ರಂದು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ, ಮಾತನಾಡಿದ ಸೀತಾರಾಮ್ ಪವಾರ್ ಅವರು, ನಾವೊಬ್ಬರೇ ಮುಂದೆ ಬರದೇ ಸಮಗ್ರ ಸಮುದಾಯವನ್ನ ಮುಂಚೂಣಿಯಲ್ಲಿ ಕೊಂಡೊಯ್ಯಬೇಕಿದೆ ಎಂದರು. 
ಅಲ್ಲದೇ, ಈ ದೇವಸ್ಥಾನ ನಿರ್ಮಾಣಕ್ಕೆ ಭೆನ್ನೆಲುಬಾಗಿ ನಿಂತ ಸಿ.ಪಿ ಬೊಮ್ಮನಪಾಡ, ಡಾ. ಕುಬೇರ್ ನಾಯಕ್, ಪಿ.ಎಸ್. ರಜಪೂತ್, ವಿ.ಸಿ ನಾಯಕ್, ಶ್ರವಣಕುಮಾರ್ ರಾಠೋಡ್ ಅವರಿಗೂ ಧನ್ಯವಾದ ತಿಳಿಸಿದರು. ಜೊತೆಗೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ನಮನಗಳು ಎಂದು ತಮ್ಮ ಅನಿಸಿಕೆ ಹಂಚಿಕೊಂಡರು.
Post a Comment

Post a Comment