ಗಜೇಂದ್ರಗಡ : (Dec_17_2023)
ಗದಗ ಜಿಲ್ಲೆ ಗಜೇಂದ್ರಗಡ ಪಟ್ಟಣದ ಎಪಿಎಂ ಎದುರುಗಡೆ ಬಯಲು ಜಾಗೆಯಲ್ಲಿನ ಬೇವಿನ ಮರಕ್ಕೆ ವ್ಯಕ್ತಿಯೊಬ್ಬ ನೇಣಿಗೆ ಶರಣಾಗಿದ್ದಾನೆ. ಪ್ರಾಥಮಿಕ ತನಿಖೆಯ ಪ್ರಕಾರ ನೇಣಿಗೆ ಶರಣಾದ ವ್ಯಕ್ತಿಯನ್ನ ರಾಜು ಹೊನ್ನುಂಗುರ ಶಿವಾಜಿ ಪೇಟೆಯ ವಾಜಿಪೇಯಿನಗರದ ನಿವಾಸಿ ಎಂದು ಗುರುತಿಸಲಾಗಿದೆ.
ಘಟನಾ ಸ್ಥಳದಲ್ಲೇ ಬಿದ್ದಿದ್ದ ಸೀರೆಯ ತುಂಡಿನಿಂದ ನೇಣು ಬಿಗಿದುಕೊಂಡಿದ್ದಾನೆ. ಭಾನುವಾರ ಇಲ್ಲಿನ ಬಯಲು ಜಾಗೆಯಲ್ಲಿ ಸಾರ್ವಜನಿಕರು ಓಡಾಡುವುದು ಸರ್ವೇ ಸಾಮಾನ್ಯ. ಆದ್ರೆ, ನುಸು ಸಂಜೆಯಾಗಿದ್ದರಿಂದ ಯಾವಾಗ ನೇಣಿಗೆ ಶರಣಾಗಿದ್ದಾನೆ ಎಂದು ತಿಳಿಯದಾಗಿದೆ. ಗಾಡಿಗಳ ಬೆಳಕು ಗಿಡದ ಮೇಲೆ ಬಿದ್ದಾಗ ಅಕ್ಕಪಕ್ಕದ ಮನೆಯವರಿಗೆ ಗಿಡಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಶವ ಗೋಚರವಾಗಿದ್ದು, ಸ್ಥಳೀಯರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಶವ ಗುರುತಿಸಿದ್ದಾರೆ. ಅದೇನೇ ಇರಲಿ ಬಯಲು ಜಾಗೆ ಇದ್ದುದರಿಂದ ಇಂತಹ ಘಟನೆ ನಡೆದಿರಬಹುದು ಎನ್ನುತ್ತಾರೆ ಸ್ಥಳೀಯರು. ಇದೇ ಮೊದಲ ಬಾರಿಗೆ ಈ ಜಾಗೆಯಲ್ಲಿ ಇಂತಹ ಘಟನೆ ನಡೆದಿದ್ದು, ಅಕ್ಕಪಕ್ಕದ ಮನೆಯಲ್ಲಿನ ಮಹಿಳೆಯರು, ಮಕ್ಕಳು ಭಯದಲ್ಲಿದ್ದಾರೆ.
Post a Comment